Thursday 23 June 2016

ಯೋಗ ದಿನಾಚರಣೆ- Inauguration of International Yoga Festival 2016

ಆಲಕಾ ಜಿತೇಂದ್ರ - ಯೋಗ

ಯೋಗ
ಭಂಗಿಗಳ ದೇವತೆಗಳಿಗರುಹಿ
ಮಹಾದೇವನಾದ ಆದಿಯೋಗಿ
ಪತಂಜಲಿಯ ಯೋಗಸೂತ್ರವ ಗ್ರಹಿಸಿ
ವಿವೇಕಾನಂದರಾದರು ರಾಜಯೋಗಿ
ಚಂಚಲ ಚಿತ್ತವ ನಿಯಂತ್ರಿಸು
ಅಷ್ಟಾಂಗಯೋಗವ ಅಭ್ಯಸಿಸು
ಆಸನದಿಂ ವೃದ್ಧಿಸುವುದು ಚೈತನ್ಯ, ಆರೋಗ್ಯ
ಪ್ರಾಣಾಯಾಮದಿ ಉಸಿರು ನಿಯಂತ್ರಣ ಯೋಗ್ಯ
ಸ್ಥಿರ, ಶಾಂತ ಮನಸಿಗಾಗಿ ಧ್ಯಾನ
ಧನ್ಯವಾಯಿತು ಈ ಜೀವನ
ತನುಮನಗಳ ಸೇರಿಸಿ, ಬುದ್ಧಿಭಾವಗಳ ನಿಯಂತ್ರಿಸಿ,
ಪಂಚತತ್ವಗಳ ಮೀರಿ, ನೀಡಿ ಆಧ್ಯಾತ್ಮದ ಅನುಭೂತಿ
ಹರಿಯುತ್ತಲೇ ಇರಲಿ ಪ್ರಾಣ ನಿರಂತರ
ನಾಡಿಗಳಲಿ, ಚಕ್ರಗಳಲಿ
ಶಾಂತಿಬೀಜವ ಬಿತ್ತಲಿ
ದೇಶದೇಶಗಳ ಧಮನಿ ಧಮನಿಗಳಲಿ
ವಿಶ್ವ ಯೋಗದಿನದ ಶುಭಾಶಯಗಳು. ‪#‎internationalyogaday‬
-ಅಲಕಾ ಜಿತೇಂದ್ರ

Tuesday 10 May 2016

ಅಲಕಾ ಜಿತೇಂದ್ರ - ಅಮ್ಮನ ಬಿಸಿ ಅಪ್ಪುಗೆ

ಒಲ್ಲದ ಮನಸ್ಸು ಆ ಕಂದನಿಗೆ
ಅಮ್ಮನ ಅಗಲಿ ಹೋಗಲೇಬೇಕೆ ಶಾಲೆಗೆ?
ಬಸ್ಸೇರುವ ಹೊತ್ತು,
ಕಣ್ಣುಗಳಿಂದ ಸುರಿದಿತ್ತು ಮುತ್ತು
ಕಳೆದುಕೊಂಡಂತೆ ತನ್ನ
ರಕ್ಷಾಕವಚ,
ಭಯಭೀತ ಕಂದನಿಗೆ
ಅಮ್ಮನ ಮುತ್ತಿನ ಸಾಂತ್ವನ.
ಕಂದನ ಕಳುಹಿಸಿದ
ಅಮ್ಮನಿಗೂ ತಳಮಳ
ಇನ್ನೆಷ್ಟು ಹೊತ್ತು
ಬರಲು ಶಾಲಾವಾಹನ?
ಮತ್ತೆ ಮನೆಗೆ ಮರಳಲು
ಅರಳಿವೆ ಆ ಕಣ್ಣುಗಳು
ಕಾಣುತ್ತಲೇ ಅಮ್ಮ,
ಹಾರಿ, ಅವಳ ಸೊಂಟವೇರಿ,
ಕತ್ತು ಬಳಸಿ, ಕೆನ್ನೆಗೊಂದು ಮುತ್ತು
ಅಮ್ಮನ ಬಿಸಿ ಅಪ್ಪುಗೆಯ ಸುಖ
ಕಂದನಿಗಷ್ಟೇ ಗೊತ್ತು .
-ಅಲಕಾ ಜಿತೇಂದ್ರ.

Thursday 5 May 2016

ಡಾ / ಕೆ. ಎಸ್. ಪವಿತ್ರ - ‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!

‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!: “ಡಾಕ್ಟ್ರೇ, ಇವರಿಗೆ ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಆತಂಕ. ಯಾವುದೇ ದಿನಪತ್ರಿಕೆಯಲ್ಲಿ ಯಾವುದಾದರೂ ಕಾಯಿಲೆಯ ಬಗ್ಗೆ ಬಂದರೆ ಅದರ ಬಗ್ಗೆ ಓದಿ, ತನಗೆ ಅದೇ ಕಾಯಿಲೆ ಇದೆ ಅಂದುಕೊಳ್ಳೋದು. ಆಮೇಲೆ ಇದ್ದಬದ್ದ ಪರೀಕ್ಷೆ ಎಲ್ಲಾ ಮಾಡಿಸೋದು. ‘ತಲೆನೋವು’ ಅಂದ್ರೆ ನಾವೆಲ್ಲಾ ಏನು ಮಾಡ್ತೀವಿ? ‘ಓ, ಇವತ್ತು ಊಟ ಮಾಡೋದು ಲೇಟಾಯ್ತಲ್ಲ’ ಅಂತ ಅಂದ್ಕೋತೀವಿ. ಸುಮ್ಮನಾಗ್ತೀವಿ.

Tuesday 3 May 2016

ಬದುಕಿಗೆ ನಿವೃತ್ತಿಯೇ ಇಲ್ಲ

ಬದುಕಿಗೆ ನಿವೃತ್ತಿಯೇ ಇಲ್ಲ: ಕೆಲಸದ ಬಗ್ಗೆ, ನಿವೃತ್ತಿ ಬಗ್ಗೆ ಜನ ತಪ್ಪಾದ ಅಭಿಪ್ರಾಯ ಹೊಂದಿದ್ದಾರೆ. ನಾನು ಕಡಿಮೆ ಕೆಲಸ ಮಾಡಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷ ಕಳೆದಂತೆ ಅದು ನಂಬಿಕೆಯಾಗಿ ಬದಲಾಗುತ್ತದೆ.

Thursday 10 March 2016

ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ - ಹೇಮಾ ಪಟೇಲ್

ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ: ಗಂಭೀರ ಕಾಯಿಲೆಗಳಿಲ್ಲದಿದ್ದರೂ ಗರ್ಭಕೋಶವನ್ನು  ತೆಗೆದು ಹಾಕುವ ದಂಧೆ ರಾಜ್ಯದೆಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ.

Thursday 4 February 2016

Modi inaugurates Global Ayurveda Fest in Kozhikode

Modi inaugurates Global Ayurveda Fest in Kozhikode: Prime Minister Narendra Modi placed before an audience of Ayurveda experts and students here on Tuesday the benefits of preventive and curative healthcare from Indian systems of medicine, and also an